




ಸವಣೂರು : ಇತಿಹಾಸ ಪ್ರಸಿದ್ದ ಕೊಳ್ತಿಗೆ ಗ್ರಾಮದ ಪಾಲ್ತಾಡು ವಿಷ್ಣುನಗರದಲ್ಲಿ ಐತಿಹಾಸಿಕ ೨೫೨ನೇ ವರ್ಷದ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲ ಮಾ.೨೪ರಂದು ನಡೆಯಲಿದೆ.
ಮಾ.೨೪ರಂದು ಬೆಳಿಗ್ಗೆ ಗಣಹೋಮ,ಮಧ್ಯಾಹ್ನ ಹರಿಸೇವೆ,ಸಂಜೆ ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆಯುವುದು, ರಾತ್ರಿ ಮೇಲೇರಿಗೆ ಬೆಂಕಿ ಕೊಡುವುದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ನಂತರ ಕುಳಿಚಟ್ಟು ,ಪ್ರಸಿದ್ದ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.೨೫ರಂದು ಪ್ರಾತಃಕಾಲ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ,ಪ್ರಸಾದ ವಿತರಣೆ, ಗುಳಿಗನ ಕೋಲ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಎನ್.ನವೀನ್ ರೈ ನಡುಮನೆ ತಿಳಿಸಿದ್ದಾರೆ.