




ಕಡಬ ಟೈಮ್ಸ್ (KADABA TIMES):ಸಾಕಲು ಅಶಕ್ತವಾದ ಗೋವುಗಳನ್ನು ಕಡಬದಿಂದ ಮಂಡ್ಯದ ಗೋ ಶಾಲೆಗೆ ಕೊಂಡೊಯ್ಯಲಾಗಿದೆ.
ವಿ.ಹಿಂ.ಪ.ಬಜರಂಗದಳ ಸಹಕಾರದೊಂದಿಗೆ ಭಾನುವಾರಕಡಬ ಭಾಗದ ಹಲವು ಮನೆಗಳಿಂದ ಆಶಕ್ತ ಗೋವುಗಳನ್ನು ಮಂಡ್ಯ ನಾಗಮಂಗಲದ ಶ್ರೇಯಸ್ ಇಂಟರ್ನ್ಯಾಷನಲ್ ಪೌಂಡೇಶನ್ ಗೋ ಶಾಲೆಗೆ ಸಾಗಾಟಮಾಡಲಾಯಿತು.

ಕಡಬ ವಿಹಿಂಪ ದ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ರಾ.ಸ್ವ,ಸೇ. ಸಂಘ ಸುಳ್ಯದ ಉದ್ಯೋಗಿ ಪ್ರಮುಖ್ ನಿತ್ಯಾನಂದ ಮೇಲ್ಮನೆ, ಸತ್ಯದೀಪು ಎಂ.ಆರ್. ಪಂಜ, ಬಜರಂಗದಳ ಸಾಪ್ತಾಹಿಕ ಮಿಲನ್ ತಿಲಕ್ ರೈ ಸಹಕರಿಸಿದರು.