




ಕಡಬ ಟೈಮ್ಸ್ (KADABA TIMES):ಸುಳ್ಯ ವಿಧಾನ ಸಭಾ ಕ್ಷೆತ್ರದ ಸುುಳ್ಯ ಮತ್ತು ಕಡಬ ತಾಲೂಕಿನ ಒಟ್ಟು 240.80 ಕಿಲೋ ಮೀಟರ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಹಾಗೂ 114.20 ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಸರಕಾರ ಅನುಮೋದನೆ ನೀಡಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ.
ಈ ಗ್ರಾಮೀಣ ರಸ್ತೆಗಳನ್ನು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಮೇಲ್ದರ್ಜೆಗೆ ಏರಿಸಬೇಕೆಂದು ಕಳೆದ ಜೂನ್ ತಿಂಗಳಲ್ಲಿ ಲೋಕೋಪಯೋಗಿ ಇಲಾಖಾ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಲೋಕೊಪಯೋಗಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದನೆ ನೀಡಿ ಆದೇಶ ನೀಡಲಾಗಿದೆ ಎಂದಿದ್ದಾರೆ.

ಕಡಬ ತಾಲೂಕಿನ ಬೀರಂತಡ್ಕ-ಮುರಚೆಡವು_ಏನಾಜೆ ಬೈಲು-ಬಲ್ಯ-ನೆಲ್ಯಾಡಿ ರಸ್ತೆ 20.10 ಕಿ.ಮೀಟರ್, ಕೋಡಿಂಬಾಳ-ಐತ್ತೂರು-ಕೊಣಾಜೆ-ನೂಜಿಬಾಳ್ತಿಲ-ಬಲ್ಯ ರಸ್ತೆ 33.60 ಕಿ,ಮೀಟರ್, ದೋಳ್ಪಾಡಿ-ಎಡಮಂಗಲ-ಉಳಿಪು-ಹೊಸಮಠ-ಕಾರ್ಕಾಳ-ಕುಟ್ರುಪ್ಪಾಡಿ-ಉದನೆ-ಶಿಬಾಜೆ-ಶಿಶಿಲ ರಸ್ತೆ 38.40 ಕಿ.ಮೀಟರ್, ಬಿಳಿನೆಲೆ-ನೆಟ್ಟಣ ರೈಲ್ವೇಸ್ಟೇಷನ್-ಬೊಟ್ಟಡ್ಕ-ಕೆಂಜಾಲ ಜಂಕ್ಷನ್-ಕೊಂಬಾರು-ಬಗುಪು-ಮಣಿಭಾಂಡ-ಗುಂಡ್ಯ-ಕುಲ್ಕುಂದ ರಸ್ತೆ 9.00 ಕಿಲೋ ಮೀಟರ್, ಪುಳಿಕುಕ್ಕು-ಎಡಮಂಗಲ-ಅಲೆಕ್ಕಾಡಿ 8.60 ಕಿ.ಮೀಟರ್ ರಸ್ತೆಗಳು ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸುಳ್ಯ ತಾಲೂಕಿನ ಹಲವು ರಸ್ತೆಗಳೂ ಮೇಲ್ದರ್ಜೆಗೇರಿದೆ