ಸುಬ್ರಹ್ಮಣ್ಯ:ಸವಾರಿ ಮಂಟಪದ ಬಳಿ ಪಾರ್ಕ್ ಮಾಡಿದ್ದ ಯಾತ್ರಾರ್ಥಿಗಳ ಕಾರು ನಾಪತ್ತೆ

ಸುಬ್ರಹ್ಮಣ್ಯ:ಸವಾರಿ ಮಂಟಪದ ಬಳಿ ಪಾರ್ಕ್ ಮಾಡಿದ್ದ ಯಾತ್ರಾರ್ಥಿಗಳ ಕಾರು ನಾಪತ್ತೆ

Kadaba Times News

ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯದ ಸವಾರಿಮಂಟಪದಲ್ಲಿ ಪಾರ್ಕಿಂಗ್ ಮಾಡಿದ್ದ ಓಮ್ನಿ ಕಳವಾದ ಘಟನೆ ಶನಿವಾರ ನಡೆದಿದೆ.

ಬೆಳ್ತಂಗಡಿಯ ಬಳ್ಳಮಂಜದ ಗಣೇಶ್ ಶೆಟ್ಟಿ ಸಂಸಾರದೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಓಮ್ನಿಯನ್ನು ( KA 21 P 1467) ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು.

ವಾಪಸ್ಸು ಸುಮಾರು 10.30 ರ ವೇಳೆಗೆ ಬಂದು ನೋಡಿದಾಗ ಕಾರು ನಿಲ್ಲಿಸಿದ ಜಾಗದಲ್ಲಿ ಕಾರು ಇರಲಿಲ್ಲ. ಹುಡುಕಾಡಿದರೂ ಪತ್ತೆಯಾಗದ ಕಾರಣ ಕಳ್ಳರು ಸದ್ರಿ ಕಾರನ್ನು ನಕಲಿ ಕೀಯನ್ನು ಬಳಸಿ ಕಳವು ಮಾಡಿದ್ದಾರೆ ಎಂದು ಗಣೇಶ್ ಶೆಟ್ಟಿಯವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top