




ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯದ ಸವಾರಿಮಂಟಪದಲ್ಲಿ ಪಾರ್ಕಿಂಗ್ ಮಾಡಿದ್ದ ಓಮ್ನಿ ಕಳವಾದ ಘಟನೆ ಶನಿವಾರ ನಡೆದಿದೆ.
ಬೆಳ್ತಂಗಡಿಯ ಬಳ್ಳಮಂಜದ ಗಣೇಶ್ ಶೆಟ್ಟಿ ಸಂಸಾರದೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಓಮ್ನಿಯನ್ನು ( KA 21 P 1467) ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು.

ವಾಪಸ್ಸು ಸುಮಾರು 10.30 ರ ವೇಳೆಗೆ ಬಂದು ನೋಡಿದಾಗ ಕಾರು ನಿಲ್ಲಿಸಿದ ಜಾಗದಲ್ಲಿ ಕಾರು ಇರಲಿಲ್ಲ. ಹುಡುಕಾಡಿದರೂ ಪತ್ತೆಯಾಗದ ಕಾರಣ ಕಳ್ಳರು ಸದ್ರಿ ಕಾರನ್ನು ನಕಲಿ ಕೀಯನ್ನು ಬಳಸಿ ಕಳವು ಮಾಡಿದ್ದಾರೆ ಎಂದು ಗಣೇಶ್ ಶೆಟ್ಟಿಯವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.