




ಕಡಬ ಟೈಮ್ಸ್ (KADABA TIMES):ಸೂಕ್ತ ದಾಖಲೆಗಳಿಲ್ಲದೇ ಅಧಿಕ ಪ್ರಮಾಣದ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಬಂಧಿಸಲ್ಪಟ ಇಬ್ಬರು ಆರೋಪಿಗಳಿಗೆ ಪುತ್ತೂರಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್ರವರ ಪುತ್ರ ಖಲಂದರ್(31.ವ) ಹಾಗೂ ಸವಣೂರು ಗ್ರಾಮದ ಮಾಂತೂರು ಅಬ್ದುಲ್ಲಾರವರ ಪುತ್ರ ಝಕಾರಿಯಾ(40 ವ) ಜಾಮೀನು ದೊರೆತ ಆರೋಪಿಗಳು.

ಆರೋಪಿಗಳ ಪರ ಪುತ್ತೂರಿನ ಖ್ಯಾತ ವಕೀಲ ನರಸಿಂಹ ಪ್ರಸಾದ್ ವಾದಿಸಿದ್ದು “ಪೊಲೀಸರು ಪ್ರಕರಣ ದಾಖಲಿಸಿದಂತೆ ಅದು ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯಾಗಿರಲಿಲ್ಲ . ಕಾಸರಗೋಡಿನಿಂದ ಮಂಡ್ಯಕ್ಕೆ ಅಕ್ಕಿ ಸಾಗಿಸುತ್ತಿದ್ದ ವೇಳೆ ಸಾಗಾಟದ ವಾಹನ ಅರ್ಧದಲ್ಲಿ ಕೆಟ್ಟು ಹೋದ ಕಾರಣ, ಬೇರೊಂದು ವಾಹನದಲ್ಲಿ ಅಕ್ಕಿ ಸಾಗಾಟ ನಡೆಸುತ್ತಿದ್ದರು” ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.
,ಪೊಲೀಸರು ಆರೋಪಿಗಳ ವಿರುದ್ದ 1955ರ ಅವಶ್ಯಕ ವಸ್ತುಗಳ ಮಾರಟ ಮತ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಾಲಂ 3 ಮತ್ತು 7 ರ ಪ್ರಕಾರ ಕೇಸು ದಾಖಲಿಸಿದ್ದು, ಆ ಕಾಯ್ದೆಗೆ 1981 ರಲ್ಲಿ ತಿದ್ದುಪಡಿ ತರಲಾಗಿತ್ತು. ಅದರಂತೆ ಅದು ಜಮೀನು ರಹಿತ ಪ್ರಕರಣ. ಆದರೆ ಆ ಕಾಯ್ದೆ ಸೀಮಿತ ಅವಧಿಯದಾಗಿದ್ದು, ಆ ಬಳಿಕ ಪ್ರಕರಣ ದಾಖಲಾದರೆ ಜಾಮೀನು ನೀಡಬಹುದು ಎಂಬ ಉಲ್ಲೇಖವಿದೆ” ಎಂಬ ಅಂಶವನ್ನು ನ್ಯಾಯವಾದಿ ನರಸಿಂಹ ಪ್ರಸಾದ್ ರವರು ನ್ಯಾಯದೀಶರಾಗಿ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ಜಾಮೀನು ಮಂಜೂರು ಆಗಿದೆ.