




ಕಡಬ ಟೈಮ್ಸ್ (KADABA TIMES):ಇತ್ತೀಚೆಗೆ ನಿಧನರಾದ ಕಡಬ ಟೌನ್ ಜುಮ್ಮ ಮಸೀದಿಯ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್ ಮತ್ತು ತಾ.ಪಂ. ಮಾಜಿ ಸದಸ್ಯ ಉದಯಕುಮಾರ್ ಬಿಳಿನೆಲೆ ಅವರಿಗೆ ಕಡಬದಲ್ಲಿ ಭಾನುವಾರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕಡಬದ ಜೈರಾಂ ಟವರ್ಸ್ ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಸತೀಶ್ ನಾಯಕ್, ಸೀತಾರಾಮ ಪೊಸವಳಿಕೆ, ಹಾಜಿ ಹನೀಪ್ ಕೆ.ಎಂ , ಪತ್ರಕರ್ತ ನಾಗರಾಜ್ ಎನ್.ಕೆ.ಮೊದಲಾದವರು ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಹಲವಾರು ಗಣ್ಯರು , ಉಪಸ್ಥಿತರಿದ್ದರು.