ಸುಬ್ರಹ್ಮಣ್ಯ: ಆಹಾರ ಅರಸಿ ಕಾಡಿನಿಂದ ಪೇಟೆಗೆ ಬಂದ ಎರಡು ನವಿಲುಗಳು!

ಸುಬ್ರಹ್ಮಣ್ಯ: ಆಹಾರ ಅರಸಿ ಕಾಡಿನಿಂದ ಪೇಟೆಗೆ ಬಂದ ಎರಡು ನವಿಲುಗಳು!

Kadaba Times News

ಕಡಬ ಟೈಮ್ಸ್ (KADABA TIMES):ಕಾಡಿನಲ್ಲಿ ಸರಿಯಾದ ಆಹಾರ ಸಿಗದೆ ಪ್ರಾಣಿಪಕ್ಷಿಗಳು ಜನ ಸಮೂಹ ಇರುವತ್ತ ಬರುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಕಂಡು ಬರುತ್ತಿದೆ.ಇದೀಗ ಕಡಬ ತಾಲೂಕಿನ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನವಿಲುಗಳೆರಡು ಆಹಾರ ಅರಸಿ ಪೇಟೆಯತ್ತ ಸಂಚಾರ ಆರಂಭಿಸಿದ್ದು ಜನರ ಗಮನ ಸೆಳೆದಿದೆ.

ಆಹಾರ ಹುಡುಕುತ್ತಾ ಸುಬ್ರಹ್ಮಣ್ಯ ದ ಶೇಷ ಕುಟೀರ ಸಮೀಪ ಸಾಮಾನ್ಯರಂತೆ ಜಾಗರುಕತೆಯಿಂದ ರಸ್ತೆ ದಾಟಿ ಇನ್ನೊಂದು ಕಡೆ ಪಯಣ ಬೆಳೆಸಿದೆ.ಸಾಮಾನ್ಯವಾಗಿ ನವಿಲುಗಳು ವಾಹನ ಸಂಚಾರ ಅಥವಾ ಜನರನ್ನು ಕಂಡಾಗ ಓಡುವುದು ಸಹಜ.ಆದರೆ ಈ ನವಿಲುಗಳೆರಡು ತಮ್ಮ ಹಸಿವನ್ನು ನೀಗಿಸಲು ಭಯ‌ ಮರೆತು ಓಡಾಟ ಮಾಡಿದೆ.

ಸುಬ್ರಹ್ಮಣ್ಯ ದೇವರ ವಾಹನ ಮಾಯೂರವಾಗಿದ್ದು ಈ ನವಿಲುಗಳನ್ನು ಗಮನಿಸಿದ ಜನರು ಸಾಕ್ಷಾತ್ ದೇವರೇ ಕಳುಹಿಸಿರುವುದಾಗಿ ನಂಬಿ ದೂರದಿಂದಲೇ ನಮಸ್ಕರಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top