




ಕಡಬ ಟೈಮ್ಸ್ (KADABA TIMES):ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.
ಉಡುಪಿಯಿಂದ ಕೋಳಿ ಆಹಾರ ತುಂಬಿಕೊಂಡು ಮಡಿಕೇರಿಗೆ ತೆರಳುತ್ತಿದ್ದ ಲಾರಿ ಆನೆಗುಂಡಿ ದಾಟಿ ಇಳಿಜಾರಿನಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡು, ರಸ್ತೆಯ ಬಲಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ.

ಲಾರಿಯಲ್ಲಿ ಚಾಲಕ ಮಾತ್ರ ಇದ್ದು, ಅದೃಷ್ಟವಶ ಅಪಾಯದಿಂದ ಪಾರಾಗಿದ್ದಾರೆ.