ಕಲ್ಲುಗುಡ್ಡೆ: ಅಂಧರ ಗೀತಗಾಯನಕ್ಕೆ ಮನಸೋತ ಗ್ರಾಮಸ್ಥರು

ಕಲ್ಲುಗುಡ್ಡೆ: ಅಂಧರ ಗೀತಗಾಯನಕ್ಕೆ ಮನಸೋತ ಗ್ರಾಮಸ್ಥರು

Kadaba Times News

ಕಡಬ ಟೈಮ್ಸ್, ಕಲ್ಲುಗುಡ್ಡೆ: ಸುಮಧುರ ಹಾಡುಗಳ ಗಾಯನಅದಕ್ಕೆ ಪೂರಕವಾಗಿ  ಕೀ ಬೋರ್ಡಿನಲ್ಲಿ ಹೊಮ್ಮುವ ನವೀರಾದ ಸಂಗೀತ, ತಾಳಕ್ಕೆ ಕುಣಿಯಬೇಕೆಂಬ ಬಯಕೆ ಹುಟ್ಟಿಸುವ ತಬಲ ಸಾಥ್…ಹೌದು ಇದೆಲ್ಲವೂ ಕಣ್ಣು ಕಾಣದ ಕಲಾವಿದರು ಕಲ್ಲುಗುಡ್ಡೆಯಲ್ಲಿ ನಡೆಸಿಕೊಟ್ಟ ಗೀತಾಗಾಯನ ಕಾರ್ಯಕ್ರಮದ ನೋಟ.

 ನೂಜಿಬಾಳ್ತಿಲಕಲ್ಲುಗುಡ್ಡೆ ಶ್ರೀರಾಮ್ ಫ್ರೆಂಡ್ಸ್ ಮತ್ತು ಚಿರು ಎಸ್.ಎಂ. ಸೌಂಡ್ಸ್ ಮತ್ತುಲೈಂಟಿಂಗ್ಸ್ ವತಿಯಿಂದ 4ನೇ ವರ್ಷದ ಹೊಸವರ್ಷದ ಪ್ರಯುಕ್ತಸಂಗೀತಾ ಕಾರ್ಯಕ್ರಮ ಹಾಗೂ ಕ್ರೀಡಾಪಟುಗಳ ಸಮ್ಮಾನಕಾರ್ಯಕ್ರಮ ಕಲ್ಲುಗುಡ್ಡೆಯಲ್ಲಿ ಬುಧವಾರ ನಡೆಯಿತು. ಈವೇಳೆ ಶೃಂಗೇರಿ ಶ್ರೀ ಶಾರದಾ ಅಂಧರ ಗೀತಗಾಯನಕಲಾಸಂಘದ ಸದಸ್ಯರು ಪ್ರಸ್ತುತಪಡಿಸಿದ ಗೀತಗಾಯನಕ್ಕೆ ಗ್ರಾಮಸ್ಥರು ಮನಸೋತರು. ನೂರಾರುಜನರ ಮಂದೆ  ನಿತ್ಯ ಗುನುಗುವ ವಿವಿಧ ಹಾಡುಗಳಿಗೆ ಧ್ವನಿಯಾದಅಂಧ ಗಾಯಕರು ಚಪ್ಪಾಳೆಯ ಪ್ರಶಂಸೆಯನ್ನು ಪ್ರತಿ ಹಾಡಿಗೂ ಪಡೆದರು. ಶ್ರೀ ರಾಮ್ ಗೆಳೆಯರ ಬಳಗದಶ್ಯಾಮ್‍ಪ್ರಸಾದ್ ಕಲ್ಲುಗುಡ್ಡೆ ಹಾಗೂಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಸಭಾಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿಭಾಗವಹಿಸಿದ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಜ್ಞಾ ನಡುವಾಳು ಮತ್ತುಸ್ವಪ್ನಾ ಕುರಿಯಾಳ ಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕತುಳು ಸಾಹಿತ್ಯ ಅಕಾಡೆಮಿ ಸದಸ್ಯಕಡಬ ದಿನೇಶ್ ರೈ , ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಕಡಬ , ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷಸದಾನಂದ ಗೌಡ ಸೇರಿದಂತೆ ಗ್ರಾ.ಪಂ ಸದಸ್ಯರು ,ಸ್ಥಳೀಯ ವಿವಿಧಸಂಘಟನೆಗಳ ಮುಖಂಡರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top