ಕಡಬ ಠಾಣೆಯಿಂದ ಇಬ್ಬರು ಪೋಲಿಸ್‌ ಹೆಡ್‌ ಕಾನ್‌ಸ್ಟೇಬಲ್‌, ನಾಲ್ಕು ಮಂದಿ ಕಾನ್‌ಸ್ಟೇಬಲ್‌ ಗಳು ವರ್ಗಾವಣೆ

ಕಡಬ ಠಾಣೆಯಿಂದ ಇಬ್ಬರು ಪೋಲಿಸ್‌ ಹೆಡ್‌ ಕಾನ್‌ಸ್ಟೇಬಲ್‌, ನಾಲ್ಕು ಮಂದಿ ಕಾನ್‌ಸ್ಟೇಬಲ್‌ ಗಳು ವರ್ಗಾವಣೆ

Kadaba Times News

ಕಡಬ ಟೈಮ್ಸ್(KADABA TIMES):  ಕಡಬ: ಇಲ್ಲಿನ ಠಾಣೆಯಿಂದ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳು ಹಾಗೂ ನಾಲ್ಕು ಮಂದಿ ” ಕಾನ್‌ಸ್ಟೇಬಲ್‌ಗಳು ವರ್ಗಾವಣೆಗೊಂಡಿದ್ದಾರೆ




ಹೆಡ್ ಕಾನ್‌ಸ್ಟೇಬಲ್ ಹರೀಶ್ ಪುಂಚಪ್ಪಾಡಿ ಅವರು ವಿಟ್ಲ ಠಾಣೆಗೆ, ರಮೇಶ್ ಲಂಭಾಣಿ ಅವರು ಸುಳ್ಯ ಠಾಣೆಗೆ, ಕಾನ್‌ಸ್ಟೇಬಲ್‌ಗಳಾಗಿರುವ ಹರೀಶ್ ಅವರು ಪುತ್ತೂರು ಟ್ರಾಫಿಕ್ " ಠಾಣೆಗೆ, ವಿಠಲ್ ಜೋಗನ್ನನವರ್ ವಿಟ್ಲ ಠಾಣೆಗೆ, ಸೋಮಯ್ಯ ಹಿರೇಮಠ ಅವರು ಸುಳ್ಯ ಠಾಣೆಗೆ ಹಾಗೂ ಮಂಜುನಾಥ ಅವರು ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.



ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೂತನ ಎಸ್ಪಿಯಾಗಿ ಡಾ. ಅರುಣ್ ಅವರು ಅಧಿಕಾರ ಸ್ವೀಕರಿಸಿದ ದಿನವೇ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಈ ತಿಂಗಳ 31ಕ್ಕೆ (ಶನಿವಾರ) 4 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಒಂದೇ ಠಾಣೆ ಅಥವಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಸೈ, ಎಚ್‌ಸಿ ಮತ್ತು ಪಿಸಿಗಳ ಮಾಹಿತಿಯನ್ನು ಮೇ 31ರ ಸಂಜೆ 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆ ಸೂಚಿಸಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top