




ಕಡಬ ಟೈಮ್ಸ್(KADABA TIMES): ರಾತ್ರಿ ವೇಳೆ ಗ್ರಾಮಕ್ಕೆ ಸಂಬಂಧಿಸಿದ ದೈವಸ್ಥಾನದ ಬಾಗಿಲು ಬೀಗ ಒಡೆಯಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆಲಂಕಾರಿನಿಂದ ವರದಿಯಾಗಿದೆ.
![]() |
AI Created image (KADABA TIMES) |
ಜೂ.10 ರ ರಾತ್ರಿ
ಆಲಂಕಾರು ಗ್ರಾಮಕ್ಕೆ ಸಂಬಂಧಿಸಿದ ಉಳ್ಳಾಕ್ಲು ಮತ್ತು ಅಣ್ಣಪ್ಪಸ್ವಾಮಿಯ ದೈವಸ್ಥಾನಕ್ಕೆ 08-00
ಗಂಟೆಗೆ ದೈವಸ್ಥಾನದ ಬಳಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಗುತ್ತು ಮನೆಯ ಕೀರ್ತಿ ಎಂಬವರು ಓರ್ವ
ವ್ಯಕ್ತಿ ದೈವಸ್ಥಾನದ ಬಾಗಿಲಿನ ಬೀಗವನ್ನು ಒಡೆಯಲು
ಪ್ರಯತ್ನಿಸುತ್ತಿದ್ದನು.
ಕೂಡಲೇ ಪರಿಚಯಸ್ಥರೋರ್ವರಿಗೆ ಕರೆ ಮಾಡಿ ತಿಳಿಸಿದ ಹಿನ್ನೆಲೆ ಜೊತೆಯಾಗಿ ಬಂದು ಅಪರಿಚಿತನನ್ನು ವಿಚಾರಿಸಿದ್ದಾರೆ. ಸಮರ್ಪಕವಾಗಿ ಉತ್ತರಿಸಿದ ಹಿನ್ನೆಲೆ ಪೊಲೀಸ್ ಠಾಣೆಗೆ ಕರೆತಂದು ದೂರು ನೀಡಿದ್ದರು.ಪೊಲೀಸರ ವಿಚಾರಣೆ ಸಂದರ್ಭ ತನ್ನ ಹೆಸರು ಹನುಮಂತರಾಯ ಯಾನೆ ಗೌಡನಗೌಡ ಎಂಬುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ. ಆತನ ವಿಳಾಸ ಕೇಳಲಾಗಿ ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ .
ದೈವಸ್ಥಾನದಲ್ಲಿ ಬೆಲೆಬಾಳುವ ವಸ್ತುಗಳಿರಬಹುದೆಂದು ಬಾಗಿಲನ್ನು ಒಡೆಯುವರೇ ಪ್ರತ್ನಿಸಿರುವುದಾಗಿದೆ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಆತನ ವಿರುದ್ದ . ಕಡಬ ಪೊಲೀಸ್ ಠಾಣಾ ಅ.ಕ್ರ 45/2025 ಕಲಂ: 331(4),305,62 BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.