


ಕಡಬ ಟೈಮ್, ಪ್ರಮುಖ ಸುದ್ದಿ: ಉತ್ತಮ ಸಮಾಜ ನಿರ್ಮಾಣದ ಕಾಯಕದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸುವ ನಡುವೆ ದೇಶ ರಕ್ಷಣೆ ಮಾಡುವತ್ತಲೂ ಯೋಚಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡುತ್ತಿರುವುದು
ಅವರು ಕಡಬದಲ್ಲಿ ತಾಲೂಕು ಆಡಳಿತ ವತಿಯಿಂದ
ಹಮ್ಮಿಕೊಂಡ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತನಾಡಿದರು. ದೇಶದ ಸಮಗ್ರತೆಯೇ ನಮ್ಮ
ಆಧ್ಯತೆಯಾಗಬೇಕು. ಸೇವಮನೋಭಾವ ನಮ್ಮಲ್ಲಿರಬೇಕು ಎಂದರಲ್ಲದೆ ಸಮಾಜ ಕಟ್ಟುವಲ್ಲಿ ಮುಂಚೂಣಿಯಲ್ಲಿರುವ
ಸಮಾಜದ ವಿವಿಧ ಕ್ಷೇತ್ರದಲ್ಲಿರುವವರನ್ನು ಗಣರಾಜ್ಯೋತ್ಸ ಸಂದರ್ಭ ಗುರುತಿಸುವ ಕಾರ್ಯ ಆಗಬೇಕೆಂದರು.
ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಧಜಾರೋಹಣ ಮತ್ತು ಸ್ವೀಕಾರ ಮಾಡಿದರು. , ಎಸ್.ಐ
ಅಭಿನಂದನ್ ಸೇರಿದಂತೆ ವಿವಿಧ ಇಲಾಖೆಗೆಯ ಅಧಿಕಾರಿಗಳು ಹಾಜರಿದ್ದರು.