




![]() |
ಠಾಣೆ ಮುಂಭಾಗ ಸೇರಿದ ಜನರು( ಕಡಬ ಟೈಮ್ಸ್) |
ಕಡಬ: ನಾಪತ್ತೆಯಾದ ಯುವಕನನ್ನು ಕೊಲೆ ಮಾಡಲಾಗಿದೆ. ಆತನನ್ನು ಕೊಲೆ ಮಾಡಿದ ಆರೋಪಿಯನ್ನು ಠಾಣೆಯಲ್ಲಿ ಇರಿಸಲಾಗಿದೆ, ಆದರೂ ಸಂದೀಪ್ ನ ಮೃತದೇಹವನ್ನು ಹುಡುಕಲು ವಿಳಂಬವೇಕೆ ಎಂದು ಪ್ರಶ್ನಿಸಿ ಮೃತ ಯುವಕನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಠಾಣೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಡಿ.2ರಂದು ನಡೆದಿದೆ.
ಪೊಲೀಸರ ವಿಳಂಬ ದೋರಣೆ ಮಾಡಿರುವುದಾಗಿ ಆರೋಪಿಸಿ ಠಾಣಾ ಮುಂಭಾಗ ಕಾಣೆಯಾದ ಯುವಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಕ್ರೋಶಿತರನ್ನು ಸಮಾಧಾನ ಪಡಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್. ಅವರು ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೆ ಇಲ್ಲ, ತಪ್ಪಿಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೊಲೆಯಾಗಿರುವ ಬಗ್ಗೆ ಕೇಸು ದಾಖಲಾದ ಬಳಿಕವೇ ಶವ ಪತ್ತೆಗೆ ಪೋಲಿಸರು ಮುಂದಾಗಬೇಕಿದ್ದು ಇದೀಗ ಠಾಣೆಯಲ್ಲಿ ಕೇಸು ದಾಖಲಿಸಿ ಶವ ಪತ್ತೆಗಾಗಿ ತಯಾರಿ ನಡೆಸಲಾಗುತ್ತಿದೆ.
ರಾಜಕೀಯ ನಾಯಕರೊಬ್ಬರು
ಪ್ರಭಾವ ಬೀರುತ್ತಿರುವುದಾಗಿ ಸುದ್ದಿ ಹಬ್ಬಿದೆ. ಈ ಬಗ್ಗೆಯೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಯಾಗುತ್ತಿದೆ.