ಕಡಬ: ಮನೆ ನೆಲಸಮ ಪ್ರಕರಣ: ಮಾನವ ಹಕ್ಕುಗಳ ಆಯೋಗದ ಮೊರೆ ಹೋದ ವೃದ್ದ ದಂಪತಿಗಳು

Kadaba Times News

ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು  ಸ್ಥಳ(KADABA TIMES)


ಕಡಬ: ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ವಾಸ್ತವ್ಯದ ಮನೆ ನೆಲಸಮಗೊಳಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿ ನಮಗೆ ನ್ಯಾಯ ಒದಗಿಸುವಂತೆ ವೃದ್ಧೆ ರಾಧಮ್ಮ .30ರಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರುನೀಡಿದ್ದಾರೆ.


.13ರಂದು ಬೆಳಿಗ್ಗೆ 6.45ಕ್ಕೆ ಪತಿ ಮುತ್ತುಸ್ವಾಮಿ ಜೊತೆ ವಾಸವಾಗಿದ್ದ ನಮ್ಮ ಮನೆಗೆ ನುಗ್ಗಿನಮ್ಮನ್ನು ಮನೆಯಿಂದ ಎಳೆದು ತಂದು ಮಾನಸಿಕ ಚಿತ್ರ ಹಿಂಸೆ ನೀಡಿದ್ದಾರೆ. ನಾವು ಕೈ ಮುಗಿದು ಪರಿ ಪರಿಯಾಗಿ ಕೇಳಿದರೂ ಗಮನ ಕೊಡದೆ ಬೆಳಗ್ಗಿನ ಉಪಾಹಾರಕ್ಕಾಗಿ ಮಾಡಿಟ್ಟ ಆಹಾರವನ್ನುಚೆಲ್ಲಾಪಿಲ್ಲಿಯಾಗಿ ಚೆಲ್ಲಿ, ಮನೆಯಲ್ಲಿದ್ದ ಮೌಲ್ಯಯುತ ಸಾಮಗ್ರಿಗಳನ್ನು ಒಡೆದು ಹಾಕಿ, ಸಾಕುಪ್ರಾಣಿಗಳಿಗೆ ಚಿತ್ರಹಿಂಸೆ ನೀಡಿ, ಜಾತಿ ನಿಂದನೆ ಮಾಡಿ ವಾಸವಿದ್ದ ಮನೆಯನ್ನು ನೆಲಸಮ ಮಾಡಿದ್ದಾರೆ.


ಬಳಿಕ ನಾವು ತಾತ್ಕಾಲಿಕವಾಗಿ ನಿರ್ಮಿಸಿದ ಗುಡಿಸಿಲಿನ ಮೇಲ್ಛಾವಣಿಗೆ ಹಾಕಿದ್ದ ಪ್ಲಾಸ್ಟಿಕ್ ಶೀಟ್ ಮೇಲೆಪ್ರತಿದಿನ ರಾತ್ರಿ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಮನೆ ನೆಲಸಮಗೊಳಿಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಕೆಡವಿದ ಮನೆ ಮರು ನಿರ್ಮಾಣಮಾಡಿಕೊಡಲು ಆದೇಶ ನೀಡಿ, ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top