ಸೊಸೈಟಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ :ಹಣಕ್ಕಾಗಿ ಕೊ*ಲೆ ಮಾಡಿ ಎಸೆದಿರುವ ಶಂಕೆ

ಸೊಸೈಟಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ :ಹಣಕ್ಕಾಗಿ ಕೊ*ಲೆ ಮಾಡಿ ಎಸೆದಿರುವ ಶಂಕೆ

Kadaba Times News

 

ಪಡ್ಡಾಯೂರು ನಿವಾಸಿ ನಂದಕುಮಾರ್ (KADABA TIMES)

ಕಡಬ ಟೈಮ್ಸ್, ಪುತ್ತೂರು: ಸೊಸೈಟಿಯೊಂದರಿಂದ ಹಣ ಡ್ರಾ ಮಾಡಿ ತೆರಳಿದ್ದ ವ್ಯಕ್ತಿಯೊಬ್ಬರು *ವವಾಗಿ ಪತ್ತೆಯಾದ ಘಟನೆ ಪುತ್ತೂರಿನಿಂದ ವರದಿಯಾಗಿದೆ.


ಪುತ್ತೂರಿನ ಪಡ್ಡಾಯೂರು ಎಂಬಲ್ಲಿನ ನಿವಾಸಿಯಾಗಿರುವ ನಂದಕುಮಾರ್(61) ಎಂಬವರು ಅನುಮಾನಸ್ಪದವಾಗಿ ಸಾ*ವನ್ನಪ್ಪಿದವರು.


ನಂದಕುಮಾರ್ ಪುತ್ತೂರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ವೇಳೆ ಸಂಬಂಧಿಯೊಬ್ಬರಿಗೆ ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ಡ್ರಾ ಮಾಡಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ.


ಡಿ.6   ಪುತ್ತೂರು ಸಾಲ್ಮರ ಸಮೀಪದ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ ಮೃ*ತದೇಹ ಪತ್ತೆಯಾಗಿದೆ.  ಗುರುವಾರದಿಂದ  ನಾಪತ್ತೆಯಾಗಿದ್ದ ಇವರ  ಸುಳಿವು ಇರಲಿಲ್ಲ. ಆದ್ರೆ  ಅವರು ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ಇತ್ತಾದ್ರೂ ಮೃ*ತದೇಹದ ಬಳಿ ಸಿಕ್ಕ ಚೀಲದಲ್ಲಿ ಯಾವುದೇ ಹಣ ಕಂಡು ಬಂದಿಲ್ಲ. ಹೀಗಾಗಿ ಹಣಕ್ಕಾಗಿ ಕೊ*ಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.


ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top