




![]() |
ಪಡ್ಡಾಯೂರು ನಿವಾಸಿ ನಂದಕುಮಾರ್ (KADABA TIMES) |
ಕಡಬ ಟೈಮ್ಸ್, ಪುತ್ತೂರು: ಸೊಸೈಟಿಯೊಂದರಿಂದ ಹಣ ಡ್ರಾ ಮಾಡಿ ತೆರಳಿದ್ದ ವ್ಯಕ್ತಿಯೊಬ್ಬರು ಶ*ವವಾಗಿ ಪತ್ತೆಯಾದ ಘಟನೆ ಪುತ್ತೂರಿನಿಂದ ವರದಿಯಾಗಿದೆ.
ಪುತ್ತೂರಿನ ಪಡ್ಡಾಯೂರು ಎಂಬಲ್ಲಿನ ನಿವಾಸಿಯಾಗಿರುವ ನಂದಕುಮಾರ್(61) ಎಂಬವರು ಅನುಮಾನಸ್ಪದವಾಗಿ ಸಾ*ವನ್ನಪ್ಪಿದವರು.
ನಂದಕುಮಾರ್ ಪುತ್ತೂರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಈ ವೇಳೆ ಸಂಬಂಧಿಯೊಬ್ಬರಿಗೆ
ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ಡ್ರಾ ಮಾಡಿದ್ದರು
ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ಡಿ.6 ಪುತ್ತೂರು
ಸಾಲ್ಮರ ಸಮೀಪದ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ ಮೃ*ತದೇಹ ಪತ್ತೆಯಾಗಿದೆ.
ಗುರುವಾರದಿಂದ ನಾಪತ್ತೆಯಾಗಿದ್ದ ಇವರ ಸುಳಿವು
ಇರಲಿಲ್ಲ. ಆದ್ರೆ ಅವರು
ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ಇತ್ತಾದ್ರೂ ಮೃ*ತದೇಹದ ಬಳಿ
ಸಿಕ್ಕ ಚೀಲದಲ್ಲಿ ಯಾವುದೇ ಹಣ ಕಂಡು ಬಂದಿಲ್ಲ.
ಹೀಗಾಗಿ ಹಣಕ್ಕಾಗಿ ಕೊ*ಲೆ ಮಾಡಿ
ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.