Breaking: ಪುತ್ತೂರು ಸಮೀಪ ನಸುಕಿನ ಜಾವ ಕಂದಕಕ್ಕೆ ಉರುಳಿದ ಕಾರು: ಸುಳ್ಯದ ಮೂವರು ದುರ್ಮರಣ

Kadaba Times News

 ಕಡಬ ಟೈಮ್ಸ್ , ಪುತ್ತೂರು:  ಪುತ್ತೂರಿನ ಹೊರ ವಲಯ ಪರ್ಲಡ್ಕದಲ್ಲಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ಮೂವರು ಸಾವನ್ನಪ್ಪಿದ್ದ ದುರಂತ ಇಂದು (ಡಿ.28) ನಸುಕಿನ ಜಾವ ನಡೆದಿದೆ.

ಪುತ್ತೂರು ಬಳಿ ಉರುಳಿ ಬಿದ್ದಿರುವ ಕಾರಿನ ದೃಶ್ಯ(KADABA TIMES)


ಪುಣಚ ಗ್ರಾಮದ ದಂಬೆ ಅಪ್ಪುಮೂಲೆ ಎಂಬಲ್ಲಿ ಕುಟುಂಬದ ಗೋಂದೋಲು ಪೂಜೆ ಕಾರ್ಯಕ್ರಮಕ್ಕೆ ಹೋಗಿದ್ದ ಸುಳ್ಯದ ಜಟ್ಟಿಪಳ್ಳದ ಕುಟುಂಬವೊಂದು ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕೆ10 ಕಾರು ಪುತ್ತೂರು ಬೈಪಾಸ್ ರಸ್ತೆ ಪರ್ಲಡ್ಕದಲ್ಲಿ ರಸ್ತೆ ಬದಿಯ ಪ್ರಪಾತಕ್ಕೆ ಬಿದ್ದಿದೆ.


ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸುಳ್ಯ ಜಟ್ಟಿಪಲ್ಲ ನಿವಾಸಿ ಅಣ್ಣು ನಾಯ್ಕ ಯಾನೆ ಮೋಹನ್ ನಾಯ್ಕ(85ವ), ಅವರ ಪುತ್ರ ಚಾಲಕ ಚಿದಾನಂದ ನಾಯ್ಕ(58ವ), ಸ್ಥಳೀಯ ನಿವಾಸಿ ರಮೇಶ್ ನಾಯ್ಕ್ ಎಂಬವರು ಸಾವನ್ನಪ್ಪಿದ್ದಾರೆ.


ಮಾಣಿಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಪರ್ಲಡ್ಕ ಬಳಿಯ ಕಾವೇರಿ ಎಂಟರ್ ಪ್ರೈಸಸ  ಮುಂಭಾಗ ಸುಳ್ಯ ಮೂಲದ ಕಾರು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಉರುಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದುದಾಗಿ ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top