ಕಡಬದ ಕಳಾರ ಬಳಿ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿ :ತಡ ರಾತ್ರಿ ಚಾಲಕನ ನೆರವಿಗೆ ಬಂದ ಸ್ಥಳೀಯರು

ಕಡಬದ ಕಳಾರ ಬಳಿ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿ :ತಡ ರಾತ್ರಿ ಚಾಲಕನ ನೆರವಿಗೆ ಬಂದ ಸ್ಥಳೀಯರು

Kadaba Times News

 

ಕಳಾರ ಬಳಿ ಕಾರು ಪಲ್ಟಿಯಾಗಿರುವುದು(KADABA TIMES)

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ  ಕಳಾರ ಮಸೀದಿ ಬಳಿ  ತಡ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಗುರುವಾರ ನಡೆದಿದೆ.


ಉಪ್ಪಿನಂಗಡಿಯಿಂದ ಕಡಬದತ್ತ ಬರುತ್ತಿದ್ದ ಕಾರು ಪಲ್ಟಿಯಾಗಿದ್ದು ಕಡಬದ ಅಶ್ರಫ್ ಎಂಬವರು   ಪ್ರಾಣಾಪಾಯದಿಂದ ಪಾರಾಗಿದ್ದಾರೆ.  


ನಡು ರಾತ್ರಿ ಶಬ್ದ ಕೇಳಿ ಸ್ಥಳೀಯರು ಹೊರಗೆ ಬಂದಿದ್ದು ಕಾರು ಪಲ್ಟಿಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಚಾಲಕನನ್ನು ಉಪಚರಿಸಿರಿವುದಾಗಿ ತಿಳಿದು ಬಂದಿದೆ.

 

ಕಳಾರ ಮಸೀದಿಯ ಆಡಳಿತ ಮಂಡಳಿಯ  ಪ್ರಧಾನ ಕಾರ್ಯದರ್ಶಿ ಜಲೀಲ್ ಜನತಾ ಮತ್ತು  ಅನ್ಸರ್ ಜನತಾ , ಜಾಬಿರ್ ಗುಡ್ಡ ,   ಇಲ್ಯಾಸ್ ಅಂಗಡಿ ಕಾರು ಅಪಘಾತವಾದ ಸ್ಥಳಕ್ಕೆ ಬಂದು ಚಾಲಕನ ನೆರೆವಿಗೆ ಧಾವಿಸಿರುವುದಾಗಿ ತಿಳಿದು ಬಂದಿದೆ.   ಸದ್ಯ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ .



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top