ಗುಂಡ್ಯದಲ್ಲಿ ಹೆದ್ದಾರಿ ತಡೆದು ಪ್ರತಿಭಟನಕಾರರ ಆಕ್ರೋಶ: ಕೊನೆಗೂ ಎಸಿ ಬಂದ್ರು, ಅವರ ಆ ಒಂದು ಮಾತಿಗೆ ಜನ ಕೂಲ್ ಆದ್ರು !

ಗುಂಡ್ಯದಲ್ಲಿ ಹೆದ್ದಾರಿ ತಡೆದು ಪ್ರತಿಭಟನಕಾರರ ಆಕ್ರೋಶ: ಕೊನೆಗೂ ಎಸಿ ಬಂದ್ರು, ಅವರ ಆ ಒಂದು ಮಾತಿಗೆ ಜನ ಕೂಲ್ ಆದ್ರು !

Kadaba Times News

 

ಪುತ್ತೂರು ಎಸಿ ಸ್ಥಳಕ್ಕೆ ಆಗಮಿಸಿರುವುದು( kadaba times)

 ಕುಕ್ಕೆ ಸುಬ್ರಹ್ಮಣ್ಯ:  ಕಸ್ತೂರಿ ರಂಗನ್ ವರದಿಯ ವಿರುದ್ಧ ಹಾಗೂ ಭಾಗದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಕಡಬ, ಸುಳ್ಯ, ಬೆಳ್ತಂಗಡಿ  ತಾಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯೊಂದಿಗೆ .೧೫ರಂದು ಬೃಹತ್ ಪ್ರತಿಭಟನಾ ಸಭೆಯು ಶಿರಾಡಿ ಗ್ರಾಮದ ಗುಂಡ್ಯದಲ್ಲಿ  ನಡೆಯಿತು.


ಪ್ರತಿಭಟನಾ ಸಭೆ ಮುಗಿಯುವ ಹಂತಕ್ಕೆ ಬಂದಿದ್ದರೂ ಮನವಿ ಸ್ವೀಕರಿಸಲು ಮೇಲಾಧಿಕಾರಿಗಳು ಬಾರದ ಹಿನ್ನೆಲೆ ಆಕ್ರೋಶಿತಗೊಂಡ ಜನರು ಮೂರು ಮಾರ್ಗ ಸೇರುವ ಮಂಗಳೂರು - ಬೆಂಗಳೂರು ರಾಷ್ಟ್ರೀಯ  ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು.


ಕೆಲ ಸಮಯದ ಬಳಿಕ  ಸ್ಥಳಕ್ಕೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಅವರು  ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿದರು. ಈ ವೇಳೆ ಎಸಿಯವರು   ಪ್ರತಿಭಟನೆಯ ಮಾಹಿತಿಯನ್ನು ಸರಕಾರಕ್ಕೆ ಇಂದು ಸಂಜೆಯ ಒಳಗೆ ತಲುಪಿಸಿ ಮಾಧ್ಯಮದ ಮೂಲಕ ಪ್ರತಿಭಟನಾ ನಿರತರಿಗೆ ತಿಳಿಸುವುದು ಮತ್ತು ನಮಗೂ ಸರಕಾರದ ನಾನಾ ಕೆಲಸಗಳು ಇರುವ ಹಿನ್ನಲೆಯಲ್ಲಿ ತಡವಾಯಿತು  ಅದಿಕ್ಕಾಗಿ ಪ್ರತಿಭಟನಾ ನಿರತರ ಕ್ಷಮೆ ಯಾಚಿಸುವುದಾಗಿ ಹೇಳಿದರು.



ಸಭೆಯಲ್ಲಿ ಈ ಬೇಡಿಕೆಗಳು ಪ್ರಸ್ತಾಪ:  ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು, ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು, ಕೃಷಿ ಭೂಮಿ, ಅರಣ್ಯ ಭೂಮಿ ನಡುವೆ ಆನೆ ಕಂದಕ ನಿರ್ಮಿಸಬೇಕು, ಪಶ್ಚಿಮ ಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಸಬಾರದು, ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಬೇಕು, ರೈತರಿಗೆ ಕೋವಿ ಪರವಾನಗಿ ನೀಡಬೇಕು, ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಮುಂತಾದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಪ್ರತಿಭಟನೆಯಲ್ಲಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top