ಕಡಬ: ಮರ ಬಿದ್ದು ಸವಾರ ಮೃತಪಟ್ಟ ಸ್ಥಳದಲ್ಲಿ ಕೋಳಿಯ ಮೂಕ ರೋಧನ

Kadaba Times News

 

ಅಪಘಾತವಾಗಿರುವ ವಾಹನದ ಮೇಲೆ ಕುಳಿತಿರುವ ಕೋಳಿ

ಕಡಬ: ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಅವರು ಮೃತಪಟ್ಟು 2 ದಿನ ಕಳೆದಿದೆ.    ಈ ಘಟನೆಯ ಭೀಕರತೆಗೆ ಸಾಕ್ಷಿಯಾಗಿ ಅಪಘಾತಗೊಂಡ  ಸ್ಕೂಟಿ ಮತ್ತು  ಕೋಳಿ  ಸ್ಥಳದಲ್ಲೇ ಇದ್ದು ಹರಕೆ ಹೆಸರಿನಲ್ಲಿ ಬಲಿಯಾಗ ಬೇಕಿದ್ದ ಕೋಳಿ ಈ  ದುರ್ಘಟನೆಯಲ್ಲಿ ಜೀವಂತವಾಗಿ ಪಾರಾಗಿ  ಅಲ್ಲೇ ಬಾಕಿಯಾಗಿದೆ.

 

ಕೋಳಿ ಪಕ್ಕದ  ಮರದ ಕೊಂಬೆಯಲ್ಲಿ , ಕೆಲವೊಮ್ಮೆ ಸ್ಕೂಟಿಯಲ್ಲಿ  ಕುಳಿತು ಅತ್ತಿತ್ತ ನೋಡುತ್ತಿದೆ. “ಕೋರಿಗ್ ನೆನಪಂದಿ ಮರಣ” ( ಕೋಳಿಗೆ  ಅನೀರಿಕ್ಷಿತ ಮರಣ ) ಎಂಬ ತುಳುವರ ಮಾತು ಜನಜನಿತ. ಆದರೆ ಕೋಳಿ ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮರಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಜನರ ಮನಸ್ಸನ್ನೇ ಘಾಸಿಗೊಳಿಸಿದೆ. ಈ ನಡುವೆ ಅಪಘಾತವಾದ ಸ್ಥಳದಲ್ಲಿ ನುಜ್ಜು ಜುಜ್ಜಗಿರುವ   ದ್ವಿಚಕ್ರ ವಾಹನದ ಮೇಲೆ  ಹರಕೆಗಾಗಿ ಕೊಂಡೊಯ್ಯುತ್ತಿದ್ದ ಕೋಳಿ  ಮೂಕವಾಗಿ ರೋಧಿಸುತ್ತಿದೆ.

 

ಕುಟುಂಬದ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ  ಬೆಳಿಗ್ಗೆ ಕೋಳಿ ತರಲು ಕೋಡಿಂಬಾಳಕ್ಕೆ ಬಂದಿದ್ದವರು ಕೋಳಿಯನ್ನು ತೆಗೆದುಕೊಂಡು ಕಡಬ-ಪಂಜ ಡಾಮಾರು ರಸ್ತೆಯಲ್ಲಿ ತನ್ನ  (KA21 Y7243 )  ದ್ವಿಚಕ್ರ ವಾಹನದಲ್ಲಿ ವಾಪಸ್ಸು ಮನೆಗೆ ಹೋಗುತ್ತಿರುವಾಗ  ಮುರಚಡಾವು ಎಂಬಲ್ಲಿ ರಕ್ಷಿತಾರಣ್ಯದಿಂದ ಹಾಲು ಮಡ್ಡಿ ತೆಗೆದ  ಬುಡ ಶಿಥಿಲಗೊಂಡು ಅಪಾಯಕಾರಿಯಾಗಿದ್ದ ದೂಪದ ಮರವು  ಆಕಸ್ಮಿಕವಾಗಿ ಬಿದ್ದಿತ್ತು.

 ಸೀತರಾಮರವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು . ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ ನಂಬ್ರ 38/2024 ಕಲಂ:194(3), (iv) BNSS-2023ಯಂತೆ ಪ್ರಕರಣ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top