




![]() |
ಶಾಲು ಹೊದಿಸಿ ವಿಶೇಷವಾಗಿ ಗೌರವಿಸಿದ ಸಂದರ್ಭ (kadaba times) |
ಕುಕ್ಕೆ
ಸುಬ್ರಹ್ಮಣ್ಯ: ಭಾರತದ T20 ಕ್ರಿಕೆಟ್ ತಂಡದ
ನಾಯಕ ಮತ್ತು ಹೆಸರಾಂತ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಕುಕ್ಕೆ ದೇಗುಲ ಹಾಗೂ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಧರ್ಮಪತ್ನಿ ದೇವಿಶಾ ಜೊತೆ ಆಗಮಿಸಿದ ಇವರು ಮೊದಲು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಬಳಿಕ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಮಣ್ಯ ಮಠದಲ್ಲಿ ಆಶ್ಲೇಷ ಬಲಿ ಸೇವೆ, ನಾಗ ಪ್ರತಿಷ್ಠಾಪನಾ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ದಂಪತಿಗಳನ್ನು ಶಾಲು ಹೊದಿಸಿ ವಿಶೇಷವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಶಾಲು ಹೊದಿಸಿ ಗೌರವಿಸಿದರು. ಎ ಇ ಓ ಯೇಸುರಾಜ್ , ದೇವಸ್ಥಾನದ ಸಿಬ್ಬಂದಿ ಗಳು ಉಪಸ್ಥಿತರಿದ್ದರು.