ಕಡಬ: ಪೇಟೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ ಹಿರಿಯ ವ್ಯಕ್ತಿ ನಾಪತ್ತೆ: ಠಾಣೆಯಲ್ಲಿ ದೂರು ದಾಖಲು

Kadaba Times News
ಕಡಬ:ಪೇಟೆಗೆ ಹೋಗಿ ಬರುವುದಾಗಿ ಮನೆಯವರಲ್ಲಿ ಹೇಳಿ ಹೋಗಿರುವ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕು ಕೊಯಿಲ ಗ್ರಾಮದ ವಳಕಮ್ಮದ ಗುಂಡಿಜೆ ನಿವಾಸಿ ರಾಮ ಯಾನೆ ಹೊನ್ನಪ್ಪ ಗೌಡ( 82 ವ) ನಾಪತ್ತೆಯಾದವರು.


ನ.21 ರಂದು ಮುಂಜಾನೆ ಮನೆಯಿಂದ ಹೊರಟು ಉಪ್ಪಿನಂಗಡಿ ಪೇಟೆಗೆ ಹೋಗುವುದಾಗಿ ತಿಳಿಸಿ ಹೋದವರು ಉಪ್ಪಿನಂಗಡಿಗೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.


ಆಗಾಗ ಉಪ್ಪಿನಂಗಡಿಗೆ ಹೋಗಿ ಮಧ್ಯಾಹ್ನದ ವೇಳೆಗೆ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದವರು ಗುರುವಾರ  ಹೋದವರು ಮನೆಗೆ ವಾಪಾಸ್ಸು ಬಂದಿರುವುದಿಲ್ಲ.
ಆರೋಗ್ಯವಾಗಿದ್ದು ಸ್ವಲ್ಪ ಕಿವುಡುತನವಿತ್ತು.

 ಕಪ್ಪು ಮೈ ಬಣ್ಣ ಹೊಂದಿರುವ ಅವರು ಎತ್ತರದ ಆಜಾನುಬಾಹು ಮೈಕಟ್ಟು ಹೊಂದಿರುತ್ತಾರೆ ಮನೆ ಬಿಟ್ಟು ಹೋಗುವಾಗ ಬಿಳಿಮುಂಡು ಹಾಗೂ ಆಕಾಶ ನೀಲಿ ಬಣ್ಣದ ಅಂಗಿ ಧರಿಸಿದ್ದರು, ಆದುದರಿಂದ ಕಾಣೆಯಾದ ತನ್ನ ತಂದೆಯನ್ನು ಪತ್ತೆ ಹಚ್ಚಿ ಕೊಡುವಂತೆ ಮಗ  ಗಿರಿಧರ ಗೌಡ ಎಂಬವರು ಕಡಬ ಠಾಣೆಗೆ ದೂರುನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top