ನೆಲ್ಯಾಡಿ: ನೀತಿ ಸಂಘಟನೆಯ ಸಕ್ರಿಯ ಸದಸ್ಯ ಹೃದಯಾಘಾತಕ್ಕೆ ಬಲಿ

Kadaba Times News
ನೀತಿ ಸಂಘಟನೆಯ ಸಕ್ರಿಯ ಸದಸ್ಯ ಶಶಿಧರನ್ ಎನ್


 ನೆಲ್ಯಾಡಿ:  ನೀತಿ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಪಾಂಡಿಬೆಟ್ಟು ಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷ ಶಶಿಧರನ್ ಎನ್(63)  ಹೃದಯಾಘಾತದಿಂದ .21 ರಂದು ನಿಧನರಾಗಿದ್ದಾರೆ.

 

ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಅದಾಗಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ , ಪುತ್ರರಾದ ಸುಭಾಷ್, ಸುನೀಶ್, ಸುಧೀಶ್ ಹಾಗೂ ಸೊಸೆಯಂದಿರನ್ನು ಅಗಲಿದ್ದಾರೆ.


ಹಲವಾರು ವರ್ಷಗಳಿಂದ ಪಾಂಡಿಬೆಟ್ಟು ಶ್ರೀ ನಾರಾಯಣ ಗುರುಮಂದಿರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಅಂತ್ಯ ಸಂಸ್ಕಾರದ ವೇಳೆ  ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಂದಾಳುಗಳು, ಸಾರ್ವಜನಿಕರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top