


![]() |
ಕಟ್ಟಡ ಕಟ್ಟುತ್ತಿರುವ ಸ್ಥಳದಲ್ಲಿ ಪ.ಪಂ ಅಧಿಕಾರಿಗಳು |
ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರದಲ್ಲಿ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಿಸಿತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪ.ಪಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು .ಇದೀಗ ಮತ್ತೆ ಸೂಚನೆ ಧಿಕ್ಕರಿಸಿ ಕಾಮಗಾರಿ ಮುಂದುವರಿಸಿದ್ದು ಅಧಿಕಾರಿಗಳು ಮತ್ತೆ ತೆರಳಿ ಸ್ಥಳದಲ್ಲಿದ್ದ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮಳೆ ನೀರು ಹರಿದು ಹೋಗುವ ಚರಂಡಿಯನ್ನು ಮುಚ್ಚಿ ಕಟ್ಟಡ ನಿರ್ಮಾಣ ಮಾಡಿದ ದೂರಿನ ಮೇರೆಗೆ ಹಲವು ಬಾರಿ ಸ್ಥಳಕ್ಕೆ ತೆರಳಿ ಕೆಲಸ ಸ್ಥಗಿತಗೊಳಿಸುವಂತೆ ಮೌಖಿಕ ಸೂಚನೆ ನೀಡಲಾಗಿತ್ತು. ಅಧಿಕಾರಿಗಳ ಸೂಚನೆಗೆ ಕ್ಯಾರೇ ಎನ್ನದೆ ಕಾರ್ಮಿಕರ ಮೂಲಕ ಆಗಾಗ ಕೆಲಸ ನಿರ್ವಹಿಸಿತ್ತಿರುವ ವಿಚಾರ ಪ.ಪಂ ಗಮನಕ್ಕೆ ಬಂದಿತ್ತು.ಹೀಗಾಗಿ ಪ.ಪಂ ಅಧಿಕಾರಿಯೊಬ್ಬರು ಸ್ಥಳ ದಲ್ಲಿದ್ದ ಕಾರ್ಮಿಕರಿಗೆ ಎಚ್ಚರಿಕೆ ನೀಡಿದಲ್ಲದೆ, ಕಟ್ಟಡ ಮಾಲಕರಿಗೆ ಪೋನ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಟ್ಟಡ ಮಾಲಿಕರಿಗೆ ನೋಟಿಸ್: 2017ರಲ್ಲಿ ಕಟ್ಟಡ ಪರಾನಿಗೆ ಪಡೆದುಕೊಂಡು ವಾಸವಾಗಿದ್ದ ಮಾಲಕರು,ಈಗ ಕಟ್ಟುತ್ತಿರುವ ಕಟ್ಟಡಕ್ಕೆ ಯಾವುದೇ ಪರವಾನಿಗೆ ಇಲ್ಲ,ಮಳೆನೀರು ಚರಂಡಿಯನ್ನು ಕಬಳಿಸಿ ಅನಧಿಕೃತ ಭಾಗಗಳನ್ನು ನಿರ್ಮಿಸಿಸಿರುವುದನ್ನು ಕೂಡಲೇ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಕರ್ನಾಟಕ ಪುರಸಭಾ ಅಧಿನಿಯಮ 1964 ರ ನಿಯಮಾವಳಿಯಂತೆ ಪಟ್ಟಣ ಪಂಚಾಯತ್ ನಿಂದ ಕ್ರಮವಹಿಸಲಾಗುವುದು ಎಂದು ಕಟ್ಟಡ ಮಾಲಕ ಜ್ಞಾನೇಶ್ವರ್ ಎಂಬವರಿಗೆ ನೀಡಿದ ನೋಟಿಸ ನಲ್ಲಿ ಉಲ್ಲೇಖಿಸಲಾಗಿದೆ.
NOC ಪಡೆಯಲು ಪ.ಪಂ ಗೆ ಬರುತ್ತಿಲ್ಲ: ನೀರಿನ ತೋಡು ಹರಿಯುತ್ತಿರುವುದರಿಂದ ತಹಶೀಲ್ದಾರ್ ಕಚೇರಿಯಿಂದ ಕಳಾರದವರೆಗೆ ರಸ್ತೆ ಬದಿಯಿಂದ 120 ಅಡಿ ವರೆಗೆ ಮಣ್ಣು ಹಾಕದಂತೆ ಮತ್ತು 30 ಅಡಿ ಬಿಟ್ಟು ನಿವೇಶನಗಳಿಗೆ ಅನುಮತಿ ನೀಡುವಂತೆ ಪ.ಪಂ ಇಂಜಿಯರ್ ಅವರು ಅಂದಿನ ತಹಶೀಲ್ದರ್ ಅನಂತ ಶಂಕರ್ ಇರುವ ಸಂದರ್ಭದಲ್ಲಿ ಸೂಚಿಸಿದ್ದರು, ಲೋಕೋಪಯೋಗಿ ಇಲಾಖೆಯ ಮೂಲಕ NOC ಪಡೆದು ಪ.ಪಂ ಕೊಡಬೇಕು, ಆದರೆ ಯಾರೂ ಅನುಮತಿಗಾಗಿ ಬರುತ್ತಿಲ್ಲ , ಕಂದಾಯ ಇಲಾಖೆಯೇ ರಸ್ತೆಯ ಅಷ್ಟೂ ಜಾಗವನ್ನು ಕನ್ವರ್ಷನ್ ಮಾಡಿ ಕೊಡುತ್ತಿರುವುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಅನಧಿಕೃತ ಕಟ್ಟಡ ನಿರ್ಮಾಣದ ದೂರಿನ ಮೇರೆಗೆ ಪ.ಪಂಇಂಜಿನಿಯರ್ ಶಿವಕುಮಾರ್ ಅವರು ಕಡಬ ಟೈಮ್ ಗೆ ಪ್ರತಿಕ್ರಿಯಿಸಿ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ.ಪಂ ನಲ್ಲಿ ಪುರಸಭಾ ನಿಯಮಗಳು ಅನ್ವಯಿಸುತ್ತದೆ.ಇದರ ಬಗ್ಗೆ ಜನರಿಗೆ ಆರಂಭದಲ್ಲಿ ತಿಳುವಳಿಕೆ ನೀಡಬೇಕಾಗಿದೆ. ಮಳೆ ನೀರು ಹರಿಯುವ ಚರಂಡಿಯನ್ನು ಮುಚ್ಚಿ ಕಟ್ಟಡ ನಿರ್ಮಾಣ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಕಾಮಗಾರಿ ಮುಂದುವರಿಸದಂತೆ ಸೂಚಿಸಲಾಗಿದೆ ಎಂದಿದ್ದಾರೆ.