ಕಡಬ:ಯುವವಾಹಿನಿ ಘಟಕದ ವತಿಯಿಂದ ಸೆ.22ರಂದು ಕೆಸರ್ದ ಕಂಡೊಡು ಬಿರುವೆರ್ನ ಗೊಬ್ಬುಲು ಕಾರ್ಯಕ್ರಮ

Kadaba Times News

 ಕಡಬ: ಯುವವಾಹಿನಿ ಕಡಬ ಘಟಕದ ವತಿಯಿಂದ  ಸೆ.22ರಂದು ಕಡಬ ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ 3ನೇ ವರ್ಷದ ಕೆಸರ್ದ ಕಂಡೊಡು ಬಿರುವೆರ್ನ ಗೊಬ್ಬುಲು ಕಾರ್ಯಕ್ರಮ ನಡೆಯಲಿದೆ.

ಶ್ರೀ ದುರ್ಗಂಬಿಕಾ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.


ಈ ಹಿನ್ನೆಲೆಯಲ್ಲಿ  ಮಂಗಳವಾರ ಮುಂಜಾನೆ  ಶ್ರೀ ದುರ್ಗಂಬಿಕಾ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು .  ಬೆಳಗ್ಗೆ ಗಂಟೆ 9 ರಿಂದ ಸಮಾಜ ಬಾಂಧವರ ಸಂಪೂರ್ಣ ಸಹಕಾರದೊಂದಿಗೆ ವಿಜೃಂಭಣೆಯಿಂದ ಈ ನಡೆಯಲಿದೆ ಎಂದು  ಕಡಬ ಘಟಕದ ಅಧ್ಯಕ್ಷ ಸುಂದರ ಪೂಜಾರಿ ಅಂಗಣ ಹೇಳಿದರು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಸಂದರ್ಭ


ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ನಿರ್ದೇಶಕ  ಶಿವಪ್ರಸಾದ್ ನೂಚಿಲ,  ತಾಲೂಕು ಬಿಲ್ಲವ ಸಂಚಾಲನ ಸಮಿತಿಯ ಸಂಚಾಲಕ  ಜಿನ್ನಪ್ಪ ಸಾಲಿಯಾನ್, ಕುಟ್ರುಪ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ  ಲಕ್ಷ್ಮೀಶ ಬಂಗೇರ, ಕೇಂದ್ರ ಸಮಿತಿ ನಾಮನಿರ್ದೇಶಕ  ಸರಿತಾ ಉಂಡಿಲ,  ಮಾಜಿ ಅಧ್ಯಕ್ಷ ಕೃಷ್ಣಪ್ಪ ಅಮೈ, ಬಿಲ್ಲವ ಸಂಘದ ಪ್ರಮುಖರಾದ ಆನಂದ ಟೈಲರ್,   ಘಟಕದ ಉಪಾಧ್ಯಕ್ಷ  ಪ್ರಶಾಂತ್, ಕಾರ್ಯದರ್ಶಿ ಜಯಪ್ರಕಾಶ್, ಕ್ರೀಡಾ ನಿರ್ದೇಶಕ  ರಾಜು ಪದವು, ಭಜನಾ ನಿರ್ದೇಶಕಿ ನಿಶ್ಮಿತಾ, ಸುವರ್ಣ ಉಂಡಿಲ ಹಾಜರಿದ್ದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top