




ಕಡಬ ಟೈಮ್ಸ್ (KADABA TIMES):ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಭೂ ದಾಖಲೆಗಳ ಸ್ವಾಮಿತ್ವ ಯೋಜನೆಯ ಮಾಹಿತಿಯ ಗ್ರಾಮ ಸಭೆ ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ಭೂ ದಾಖಲೆಗಳ ಸಹಾಯಕ ನಿರ್ದೆಶಕ ಪುಷ್ಪರಾಜ್ ಪೂಜಾರಿ ಮಾಹಿತಿ ನೀಡಿ ಕೇಂದ್ರ ಸರಕಾರದ ಈ ಸ್ವಾಮಿತ್ವ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಒಡೆತನದಲ್ಲಿರುವ ಭೂಮಿಯ ಪೂರಕ ದಾಖಲೆಗಳಿಲ್ಲದ ಜನತೆಗೆ ಡಿಜಿಟಲ್ ಪ್ರಾಪರ್ಟಿ ಕಾರ್ಡ್ ಮಾಡುವ ಉತ್ತಮ ಯೋಜನೆಯಾಗಿದೆ. ಡ್ರೋನ್ ಕ್ಯಾಮರಾ ಮೂಲಕ ಸರ್ವೆ ಕಾರ್ಯ ಮಾಡಿ ಗಡಿಗುರುತು ಮಾಡಲಾಗುವುದು, ಕನಿಷ್ಟ ಹತ್ತು ಮನೆಗಳಿರುವ, ಮುಖ್ಯವಾಗಿ ಕಾಲೋನಿಗಳಲ್ಲಿರುವ ಮನೆ ಅಡಿ ಸ್ಥಳದ ಸಮಸ್ಯೆಗಳನ್ನು ಸಂಪೂರ್ಣ ನಿವಾರಿಸಲಾಗುವುದು, ಇದು ಶಾಶ್ವತ ಸರ್ವೆ ಕಾರ್ಯವಾಗಿದ್ದು, ಸಂಪೂರ್ಣ ಉಚಿತವಾಗಿದೆ ಜನತೆ ಇದರ ಪ್ರಯೋಜನ ಪಡೆಯುಂತೆ ಮನವಿ ಮಾಡಿದರು.

ಕಡಬ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಆರ್ ಗೌಡ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಜನ ಯೋಜನೆಯ ಜಾರಿಗೆ ಸಹಕರಿಸಬೇಕು ಎಂದರು. ಕಡಬ ತಾಲೂಕು ಭೂದಾಖಲೆಗಳ ಸೂಪರ್ವೈಸರ್ ಮಂಜುನಾಥ್ ಸಿ.ಕೆ, ಸರ್ವೆಯರ್ಗಳಾದ ನವೀನ್, ಶಿವಣ್ಣ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮಸ್ಥರಾದ ಕೆ.ಎ.ಸುಲೈಮಾನ್, ಪುರುಷೋತ್ತಮ ಗೋಕುಲನಗರ, ಸಲೀಕ, ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು. ಕೊಯಿಲ ಗ್ರಾ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮಿತಾ , ಕಾರ್ಯದರ್ಶಿ ಪಮ್ಮು ಸಹರಿಸಿದರು.