




ಕಡಬ ಟೈಮ್ಸ್ (KADABA TIMES) : ಮುಚ್ಚಿಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಜ ಅಂಚೆ ಕಚೇರಿಯ ಕರಿಕ್ಕಳ ಶಾಖಾ ಕಚೇರಿಯು ಸ್ಥಳಾಂತರಗೊಂಡು ಕರಿಕ್ಕಳದ ಯಶೋಧ ಕೆ. ಎಸ್. ರವರ ಕಟ್ಟಡದಲ್ಲಿ ಮಂಗಳವಾರ ಶುಭಾರಂಭಗೊಂಡಿತು.

ಕಾರ್ಯಕ್ರಮದಲ್ಲಿ ಯಶೋಧ ಕೆ. ಎಸ್. ರವರು ದೀಪ ಬೆಳಗಿಸಿ ಶುಭ ಹಾರೈಸಿದರು. ನಿಡ್ವಾಳ ಶ್ರೀ ಮಹಾವಿಷ್ಣು ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಪುರಿಯ ಸಾಯಿ ಕೃಪಾ, ವಿಶ್ವನಾಥ ಕರಿಕ್ಕಳ, ನ್ಯಾಯವಾದಿ ಶಂಕರ್ , ಶ್ರೀಚಂದ್, ಅಂಚೆ ನಿರೀಕ್ಷಕ ಸುದೀಪ್ ಕುಮಾರ್ ಬೋಳಾರು, ಸಬ್ ಪೋಸ್ಟ್ ಮಾಸ್ಟರ್ ನಾಗಚಾರಿ, ನಿವೃತ್ತ ಅಂಚೆ ವಿತರಕ ಗಂಗಾಧರ, ಕರಿಕ್ಕಳ ಬ್ರಾಂಚ್ ಪೋಸ್ಟ್ ಮಾಸ್ಟರ್ ಗಾಯತ್ರಿ, ಅಂಚೆ ವಿತರಕಿ ದೀಕ್ಷಾ, ಪಂಜ ಅಂಚೆ ಕಚೇರಿಯ ಸಿಬ್ಬಂದಿಗಳಾದ ಪರಮೇಶ್ವರ ಪರಮಲೆ, ದೇವಪ್ಪ ಚಳ್ಳಕೋಡಿ, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೀಕ್ಷಾ ಸ್ವಾಗತಿಸಿ. ನಾಗಚಾರಿ ವಂದಿಸಿದರು.