




ಕಡಬ ಟೈಮ್ಸ್ ( Kadaba times): ಅಪರಿಚಿತರು ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರದಲ್ಲಿ ಜೂ.6 ರ ಸಂಜೆ ನಡೆದಿದೆ.
ಕೊಲ್ಲಮೊಗ್ರದಲ್ಲಿ ಸೆಲೂನ್ ಹೊಂದಿರುವ ಚಾಂತಾಳ ನಿವಾಸಿ ಸುರೇಶ ಎಂಬವರ ಮನೆಯಲ್ಲಿ ಈ ಕಳ್ಳತನ ಘಟನೆ ನಡೆದಿರುವುದಾಗಿದೆ.
ಮನೆಯಲ್ಲಿದ್ದ ಅವರ ಪುತ್ರ ಸಂಜೆ ಮನೆಗೆ ಬೀಗ ಹಾಕಿ ತಾಯಿ ಮನ್ನಡೆಸುತ್ತಿದ್ದ ದಿನಸಿ ಅಂಗಡಿಗೆ ಬಂದಿದ್ದರು. ರಾತ್ರಿ 8 ಗಂಟೆಗೆ ಅಂಗಡಿ ಬಂದ್ ಮಾಡಿ ಮನೆಗೆ ಹೋದಾಗ ಮನೆಯ ಬೀಗ ಒಡೆದಿರುವುದು ಕಂಡುಬಂದಿದೆ.
ಬೆಡ್ ರೂಂನಲ್ಲಿರುವ ಕಪಾಟಿನ ಬಾಗಿಲು ಒಡೆದು ಅದರಲ್ಲಿದ್ದ ಸುಮಾರು ಎರಡರಿಂದ ಮೂರು ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.ಸುಬ್ರಹ್ಮಣ್ಯ ಪೋಲೀಸರು ರಾತ್ರಿಯೇ ಬಂದು ಸ್ಥಳ ತನಿಖೆ ಮಹಜರು ನಡೆಸಿದ್ದಾರೆ. ಶನಿವಾರ ಶ್ವಾನದಳ ಬರಲಿದೆಯೆಂದು ತಿಳಿದುಬಂದಿದೆ.