ಕಡಬದ ಸೇವಾ ಕೇಂದ್ರದಿಂದ ಹಣ ಎಗರಿಸಿದ ಬಾಲಕ| ಪೊಲೀಸರಿಂದ ಸಖತ್ ಕ್ಲಾಸ್, ಮುಚ್ಚಳಿಕೆ ಬರೆಸಿ ಎಚ್ಚರಿಕೆ

ಕಡಬದ ಸೇವಾ ಕೇಂದ್ರದಿಂದ ಹಣ ಎಗರಿಸಿದ ಬಾಲಕ| ಪೊಲೀಸರಿಂದ ಸಖತ್ ಕ್ಲಾಸ್, ಮುಚ್ಚಳಿಕೆ ಬರೆಸಿ ಎಚ್ಚರಿಕೆ

Kadaba Times News

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬದ ತಹಶೀಲ್ದಾರ್ ಕಚೇರಿ ಸಮೀಪದ  ಸಂಸ್ಥೆಯ ಕಛೇರಿಯೊಂದರಿಂದ ಹಣ ಕದ್ದು ಪರಾರಿಯಾಗಿದ್ದ  ಬಾಲಕನನ್ನು ಸಾರ್ವಜನಿಕರು ಹಿಡಿದು ಪೋಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಈ ಬಾಲ ಆರೋಪಿಯನ್ನು  ಏನೆಕಲ್ಲಿನ ಬಾಲಕ ದೀಕ್ಷಿತ್ (೧೫ ವ) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಕಡಬದ ಸೇವಾ ಕೇಂದ್ರ ಒಂದಕ್ಕೆ ಬಂದು ಡ್ರವರ್‌ನಲ್ಲಿದ್ದ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದ.ಬಳಿಕ ಕಛೇರಿಗೆ ಬಂದ ಪಿಗ್ಮಿ ಸಂಗ್ರಾಹಕರಿಗೆ ಹಣ ನೀಡಲು ಡ್ರವರ್ ಎಳೆದು ನೋಡಿದಾಗ ಅದರಲ್ಲಿದ್ದ ಹಣ ಮಾಯವಾಗಿತ್ತು. ಬಳಿಕ ಹತ್ತಿರದ ಸಿಸಿ ಕ್ಯಾಮರಾದಲ್ಲಿ ನೋಡಿದಾಗ ಹುಡುಗನ ಚಲನವಲನ ಗೊತ್ತಾಗಿದೆ.

ಗುರುವಾರ ಮತ್ತೆ ಕಡಬ ಬಂದ ಬಾಲಕ ನೀರು ಕುಡಿಯುವ ನೆಪದಲ್ಲಿ ಬಂದ ವೇಳೆ ಸ್ಥಳೀಯರು ಆತನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಸಣ್ಣಪುಟ್ಟ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮಾಹಿತಿ ಲಭ್ಯವಾಗಿದೆ. ಈತ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತ ತರಗತಿಗೂ ಸರಿಯಾಗಿ ಹೋಗದೆ ತಿರುಗಾಡುತ್ತಿದ್ದ. ಪೋಲೀಸರು ಮುಚ್ಚಳಿಕೆ ಬರೆಸಿಕೊಂಡು ಆತನನ್ನು ಅವನ ಪೋಷಕರಿಗೆ ಒಪ್ಪಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top