




ಇತಿಹಾಸಗಳು ಬಗೆದಷ್ಟು ತೆರೆದುಕೊಳ್ಳುತ್ತಿರುತ್ತದೆ-ಯತೀಶ್ ಉಳ್ಳಾಲ್
ಉಪ್ಪಿನಂಗಡಿ: ಕಾಲ ಗರ್ಭದಲ್ಲಿ ಉದುಗಿ ಹೋಗಿರುವ ಇತಿಹಾಸಗಳು ಬಗೆದಷ್ಟು ತೆರೆದುಕೊಳ್ಳುತ್ತಿರುತ್ತದೆ, ಇದರ ಅರಿವು ಮತ್ತು ತಿಳಿಯುವಂತದ್ದು ವಿದ್ಯಾರ್ಥಿಗಳ ದೆಸೆಯಲ್ಲಿ ಅತೀ ಅಗತ್ಯವಾಗಿದ್ದು, ಕಲಿಕೆಯ ದೃಷ್ಠಿಯಿಂದಲೂ ವಿದ್ಯಾರ್ಥಿಗಳು ಇದರತ್ತ ಹೆಚ್ಚು ಗಮನ ಹರಿಸಬೇಕು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹೇಳಿದರು.
ಅವರು ಮಾ. ೧೯ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಸಹಭಾಗಿತ್ವದಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕೀರ್ಣದಲ್ಲಿ ಚಾರಿತ್ರಿಕ ದಾಖಲೆಗಳ ಸಂರಕ್ಷಣೆ-ಸಾಧ್ಯತೆ ಮತ್ತು ಸವಾಲುಗಳ ಬಗ್ಗೆ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಮಾತನಾಡಿ ಪುರಾತನ ವಸ್ತುಗಳು ಪುರಾತನ ಕಾಲದ ಇತಿಹಾಸವನ್ನು ತಿಳಿಸುವ

ಸಾಮರ್ಥ್ಯವನ್ನು ಹೊಂದಿದ್ದು, ಹಳೆಯ ಕಾಲದ ವಸ್ತುಗಳನ್ನು ಅನಗತ್ಯವೆಂದು ಎಸೆಯದೆ ರಕ್ಷಿಸುವ ಕಾರ್ಯ ನಾಗರಿಕ ಸಮಾಜದಿಂದ ಆಗಬೇಕಾಗಿದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬಿ. ಗಣೇಶ್ ಶೆಣೈ ಮಾತನಾಡಿ ಉಪ್ಪಿನಂಗಡಿ ಎನ್ನುವುದು ಒಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಊರು. ಪುರಾಣಗಳಲ್ಲಿ, ಪಾಡ್ದನಗಳಲ್ಲಿ, ಆಡಳಿತಾತ್ಮಕ ದಾಖಲೆಗಳಲ್ಲಿ ಉಪ್ಪಿನಂಗಡಿಯ ಇತಿಹಾಸ ಅಡಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ. ಪ್ರಮೋದ್ ಎಂ.ಜಿ. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಉಪನ್ಯಾಸಕರಾದ ಎವರೆಸ್ಟ್ ರೋಡ್ರಿಗಸ್ ಸ್ವಾಗತಿಸಿ ಡಾ| ಹುಚ್ಚೇಗೌಡ ವಂದಿಸಿದರು. ಕೇಶವ ಕಾರ್ಯಕ್ರಮ ನಿರೂಪಿಸಿದರು.