




ಕಡಬ ಟೈಮ್ಸ್ (KADABA TIMES):ಲಾಕ್ ಡೌನ್ ಬಳಿಕ ಜನರ ಜೀವನ ಶೈಲಿ ,ಆಲೋಚನಾ ಕ್ರಮಗಳು,ಸಮಾಜದಲ್ಲಿ ತೊಡಗಿಕೊಳ್ಳುವ ರೀತಿಗಳಲ್ಲಿ ಬದಲಾವಣೆಗಾಳಾಗಿವೆ. ಈ ನಡುವೆ ಮಗುವಿನ ಹುಟ್ಟುಹಬ್ಬವನ್ನು ಭಿನ್ನ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ದಾರೆ.
ಪಂಜದ ತೊಂಡಚ್ಚನ್ ಇಂಡಸ್ಟ್ರೀಸ್ನ ಮಾಲಕ ಮನು ಪಂಜ ಮತ್ತು ಆಶಾ ದಂಪತಿಯ ಪುತ್ರ ಆರವ್ನ ೨ನೇ ವರ್ಷದ ಹುಟ್ಟುಹಬ್ಬವನ್ನು ಸಿಬ್ಬಂದಿಗಳಿಗೆ ಇಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ವಿತರಿಸುವ ಮೂಲಕ ಆಚರಿಸಿದ್ದಾರೆ

ಹುಟ್ಟುಹಬ್ಬವೆಂದರೆ ಕೇಕ್ ಕತ್ತರಿಸುವುದು,ಅದ್ದೂರಿ ಬೋಜನ ಕೂಟ ಏರ್ಪಡಿಸುವ ಮಧ್ಯೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಮಾತ್ರೆ ವಿತರಣೆ ಮಾಡಿ ರೋಗದ ವಿರುದ್ದ ಹೋರಾಡುವ ಅಗತ್ಯತೆಯ ಬಗ್ಗೆ ಸಂದೇಶ ನೀಡಿರುವುದು ಸುಳ್ಳಲ್ಲ.