ಕಡಬದ ಈ ಗ್ರಾಮದಕ್ಕೆ ಇರುವುದೊಂದೆ ಬಸ್: ಬಸ್ ಕೈ ಕೊಟ್ಟು ಜೀಪು, ಪಿಕಪ್ ವಾಹನಗಳಲ್ಲಿ ಶಾಲೆಗೆ ತೆರಳಿದ ಮಕ್ಕಳು

Kadaba Times News

 ಕಡಬ:ಸುಳ್ಯ ವಿಧಾನ ಸಭಾ ಕ್ಷೇತ್ರದ   ಕಡಬದ  ಕಡ್ಯ ಕೊಣಾಜೆಗೆ ಬರುವ  ಏಕೈಕ ಸರಕಾರಿ ಬಸ್ಸು ಬಾರದೆ  ಶಾಲಾ ಮಕ್ಕಳು ಖಾಸಗಿ ವಾಹನದಲ್ಲಿ ಶಾಲೆಗೆ ಹೋದ ಘಟನೆ .5ರಂದು ನಡೆದಿದೆ.


ವಾರದಲ್ಲಿ ಆಗಾಗ ಕೈ ಕೊಡುವ ಬಸ್ಸಿನಿಂದಾಗಿ ಇಂದು ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಕಡಬದಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆ ಶಾಲಾ ಮಕ್ಕಳು ಹೋಗುವ ಸಮಯದಲ್ಲಿ ಒಂದು ಬಸ್ಸು ಸಂಚರಿಸುತ್ತಿದೆ. ನೂರಾರು ವಿದ್ಯಾರ್ಥಿಗಳು ಇದ್ದರೂ ಏಕೈಕ ಬಸ್ಸು ಇರುವುದರಿಂದ ದಿನನಿತ್ಯ ವಿದ್ಯಾರ್ಥಿಗಳು ನೂಕು ನುಗ್ಗಲಿನಲ್ಲಿಯೇ ಪ್ರಯಾಣಿಸಬೇಕಾದ ಪರಿಸ್ಥಿತಿಇದೆ.


ವಿಪರ್ಯಾಸವೆಂದರೆ ಈ ಭಾಗದ ಬಸ್ಸಿನ ಚಾಲಕ ನಿರ್ವಾಹಕರು ರಜೆ ಇದ್ದಾಗ ಪ್ರತಿ ಭಾರಿಯೂ ವಾರದದಲ್ಲಿ ಒಂದೆರಡು ದಿನ ಬಸ್ಸು ಸಂಚಾರ ಇರುವುದಿಲ್ಲ, ಇದರಿಂದ ಇಲ್ಲಿನ ಗ್ರಾಮಸ್ಥರಿಗೆ ಹಾಗೂ ಶಾಲಾ ಮಕ್ಕಳಿಗೆ ಇನ್ನಿಲ್ಲದ ತೊಂದರೆ ಎದುರಾಗುತ್ತಿದೆ.




.5 ರಂದು ಬಸ್ಸು ಬಾರದೆ ಇರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು  ಪುತ್ತೂರು  ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ವೇಳೆ ಅಧಿಕಾರಿಗಳು ಇನ್ನು ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ  ಭರವಸೆ ನೀಡಿದ ಬಳಿಕ  ಮಕ್ಕಳನ್ನು ಜೀಪು, ಪಿಕಪ್ ವಾಹನಗಳಲ್ಲಿ ಕಡಬಕ್ಕೆ ಕರೆತಂದಿರುವುದಾಗಿ ತಿಳಿದು ಬಂದಿದೆ.


ಇನ್ನೂ ಮುಂದೆ ಇರುವ ಒಂದು ಬಸ್ಸು ಬಾರದೆ ಇದ್ದರೆ ಶಾಲಾ ಮಕ್ಕಳೊಂದಿಗೆ ಗ್ರಾಮಸ್ಥರು ಅಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು  ಎಚ್ಚರಿಕೆ ನೀಡಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top